ಸೋಮವಾರ, ಏಪ್ರಿಲ್ 28, 2014

ಕಿವಿಗೆ ಜೇನು ತುಪ್ಪ ಹೊಯ್ದ ಹಾಗೆ ಅದಾಗ !!

ಮೊನ್ನೆ ಮೊನ್ನೆ ಆಟೋ ಒಂದರಲ್ಲಿ ಪ್ರಯಾಣಿಸುತ್ತಿದ್ದೆ , ಆಟೋ ಚಾಲಕನ ಬಳಿ ಹೀಗೆ ಮಾತಾಡುತ್ತಿರುವಾಗ ಅವನು ಕೇಳಿದ
 "ಯಾವ ಊರು ಸರ್ ನಿಮ್ದು " ???           ನಾನು ಸ್ವಲ್ಪ ಖುಷಿಯಲ್ಲೇ ಉತ್ತರ ಕೊಟ್ಟೆ --- "ನನ್ನದು  ಮಲ್ನಾಡ್---- ತೀರ್ಥಹಳ್ಳಿ ಅಂತ " ಅಂದೆ ----- ಅದಕ್ಕೆ ಅವನು ಹೇಳಿದ - ಏನ್ ಊರು ಸರ್ ನಿಮ್ಮದು !!! ನಾನು ನೋಡಿದೀನಿ , ಏನ್ ಮಳೆ ಸರ್ ನಿಮ್ಮೂರಲ್ಲಿ !!!
     ಅದೇನು ಹಸಿರು ಸರ್ ಅಲ್ಲಿ !!! ಜನಾನು ಎಷ್ಟು ಸಾಫ್ಟ್ ಸರ್ ನಿಮ್ಮೂರಲ್ಲಿ !! ನಿಜವಾಗಲು ನಿಮ್ಮೂರು ಸ್ವರ್ಗ ಎದ್ದ ಹಾಗೆ ಇದೆ ಸರ್"--- ಅಂದ..... ಒಂದು ಕ್ಷಣ ನನ್ನ ಕಿವಿಗೆ ಜೇನು ತುಪ್ಪ ಹೊಯ್ದ ಹಾಗೆ ಆಯಿತು ನೋಡಿ !!!!  ನಿಜ ಹೇಳ್ತಿನ್ರಿ  ಹೇಗೆ ಊರು ಬಿಟ್ಟು ಊರಿಗೆ ಬಂದಾಗ  ಇಲ್ಲಿನ ಜನ ನಮ್ಮೂರಿನ ಬಗ್ಗೆ  ಹೀಗೆ ಹೊಗಳಿದಾಗ ಆಗುವ ಖುಷಿ ,  ಯಾರೇ ಬಂದು ಎಸ್ಟೇ ಕೋಟಿ ಹಣ ಕೊಟ್ರು ಆಗಲ್ಲ ಕಣ್ರೀ   ..... ..... ಏನಂತೀರ ????

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ