ಮೊನ್ನೆ ದಿನ ಗೆಳೆಯನನ್ನು ಭೇಟಿಮಾಡಲು ಹೋಗುವ ಸಲುವಾಗಿ ಬಸ್ ಸ್ಟಾಪ್ ಒಂದರಲ್ಲಿ ಬಸ್ಸಿಗೆ ಕಾಯುತ್ತ ನಿಂತಿದ್ದೆ ..
ನನ್ನ ಪಕ್ಕ ಪ್ರತಿಷ್ಟಿತ ಐ ಟಿ ಕಂಪನಿಯ ಐಡಿ ಕಾರ್ಡ್ ಧರಿಸಿದ ವ್ಯಕ್ತಿಗಳು ಬಸ್ ಕಾಯುತ್ತ ನಿಂತಿದ್ದರು . ಬಸ್ ಯಾಕೋ ಮುನಿಸಿಕೊಂಡಂತೆ ತೋರುತ್ತಿತ್ತು . ಎಷ್ಟು ಹೊತ್ತಾದರೂ ಹೊತ್ತಾದರೂ ನಾನು ಕಾಯುತ್ತಿದ್ದ ನಂಬರ್ ನ ಬಸ್ ಬಂದೆ ಇರಲಿಲ್ಲ ಅದೇ ಸಮಯಕ್ಕೆ ಯಾರೋ ಅಜ್ಜಿಯೊಬ್ಬರು ಬಂದರು , ಎಡಗೈಯಲ್ಲಿ ಒಂದು ಬ್ಯಾಗ್ ಬಲಗೈಯಲ್ಲಿ ಒಂದು ಸಣ್ಣ ಚೀಟಿಯನ್ನು ಹಿಡಿದಿದ್ದರು . ಅಲ್ಲಿ ಪ್ರತಿಷ್ಟಿತ ಕಂಪನಿ ಐಡಿ ಕಾರ್ಡ್ ದರಿಸಿದ್ದವರ ಬಳಿ ಅಜ್ಜಿ ಏನನ್ನೋ ಕೇಳುತ್ತಿದ್ದರು , ಅದಕ್ಕೆ ಅವರು ಅಗುವುದಿಲ್ಲವೆಂಬಂತೆ ದೂರ ಸರಿಯುತ್ತಿದ್ದರು . ಒಂದು ಕ್ಷಣ ಅಜ್ಜಿ ಅಸಹಾಯಕರಾಗಿ ನಿಂತು ಬಿಟ್ಟರು .
ಹತ್ತಿರ ಹೋಗಿ ಏನಾಯಿತು ಅಜ್ಜಿ ಅಂತ ಕೇಳಿದೆ ?? ಅದಕ್ಕವರು " ಮಗ ನಮ್ ಹಳ್ಳಿ ಇಂದ ಮಗನ ಮನೆಗೆ ಬಂದೆ ಇಳಿಯುವ ಸ್ಟಾಪ್ ಗೊತ್ತಾಗದೆ ಎಲ್ಲಿ ಇಳಿದುಬಿಟ್ಟೆ , ಮಗನ ಮನೆಗೆ ಹೋಗಲು ಗೊತ್ತಾಗುತ್ತಿಲ್ಲ ದಯವಿಟ್ಟು ಈ ನಂಬರ್ ಗೆ ಫೋನ್ ಮಾಡಿ ಕೊಡ್ತಿಯ ನಿನ್ ಮೊಬೈಲಿಂದ" ಅಂತ ಅವರ ಕೈಲಿದ್ದ ಚೀಟಿ ನಂಗೆ ಕೊಟ್ಟರು.
ಅವರ ಮಗನಿಗೆ ಫೋನ್ ಮಾಡಿದೆ ವಿಷಯವನ್ನು ವಿವರಿಸಿ , ಅವರ ಮನೆಯ ಅಡ್ರೆಸ್ ತಿಳಿದು ಅಜ್ಜಿಯನ್ನು ಸರಿಯಾದ ಬಸ್ ಹತ್ತಿಸಿದೆ !!
ಬಸ್ ಹತ್ತುವಾಗ " ನೂರು ವರ್ಷ ರಾಜನ ಹಾಗೆ ಬಾಳು ಮಗ " ಅಂತ ಆಶೀರ್ವದಿಸಿದರು . ಕೆಲವು ತಿಂಗಳ ಹಿಂದೆ ತೀರಿಹೋದ ನನ್ನ ಅಜ್ಜಿಯ ನೆನಪಾಗಿ ಎರಡು ಹನಿ ಕಣ್ಣಿರು ಬಂದಿದ್ದು !! ಅ ಅಜ್ಜಿ ಸಂತೋಷದಿಂದ ಬಸ್ ಹತ್ತಿ ಮಗನನ್ನು ಕಾಣುವ ತವಕದಲ್ಲಿದ್ದರು .
ಸಂಭಂದವೇ ಇಲ್ಲದವರು ಅನಿರಿಕ್ಷಿತವಾಗಿ ಸಿಕ್ಕಿ ಬಹಳ ಕಾಲ ಮನಸ್ಸಿನಲ್ಲಿ ಉಳಿಯುತ್ತಾರೆ !!
ಕೊನೆಯಲ್ಲಿ ಕಾಡಿದ ಪ್ರಶ್ನೆ ಪ್ರತಿಸ್ತಿತ ಕಂಪನಿ ಸೇರಿದರೆ ಅಪರಿಚಿತರಿಗೆ ಸಹಾಯ ಮಾಡಬಾರದು ಅಂತ ಕಾನೂನು ಏನಾದ್ರು ಇದೆಯೇ ???? ಅಥವಾ ಪರೋಪಕಾರ , ಅಪರಿಚಿತರಿಗೆ ಸಹಾಯ ಮಾಡುವ ಗುಣ ಮರೆಯಾಗಿ ಹೋಯ್ತಾ ಇಂದಿನ ಜನಾಂಗಕ್ಕೆ ????
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ