ಸೋಮವಾರ, ಏಪ್ರಿಲ್ 28, 2014

ಕಿವಿಗೆ ಜೇನು ತುಪ್ಪ ಹೊಯ್ದ ಹಾಗೆ ಅದಾಗ !!

ಮೊನ್ನೆ ಮೊನ್ನೆ ಆಟೋ ಒಂದರಲ್ಲಿ ಪ್ರಯಾಣಿಸುತ್ತಿದ್ದೆ , ಆಟೋ ಚಾಲಕನ ಬಳಿ ಹೀಗೆ ಮಾತಾಡುತ್ತಿರುವಾಗ ಅವನು ಕೇಳಿದ
 "ಯಾವ ಊರು ಸರ್ ನಿಮ್ದು " ???           ನಾನು ಸ್ವಲ್ಪ ಖುಷಿಯಲ್ಲೇ ಉತ್ತರ ಕೊಟ್ಟೆ --- "ನನ್ನದು  ಮಲ್ನಾಡ್---- ತೀರ್ಥಹಳ್ಳಿ ಅಂತ " ಅಂದೆ ----- ಅದಕ್ಕೆ ಅವನು ಹೇಳಿದ - ಏನ್ ಊರು ಸರ್ ನಿಮ್ಮದು !!! ನಾನು ನೋಡಿದೀನಿ , ಏನ್ ಮಳೆ ಸರ್ ನಿಮ್ಮೂರಲ್ಲಿ !!!
     ಅದೇನು ಹಸಿರು ಸರ್ ಅಲ್ಲಿ !!! ಜನಾನು ಎಷ್ಟು ಸಾಫ್ಟ್ ಸರ್ ನಿಮ್ಮೂರಲ್ಲಿ !! ನಿಜವಾಗಲು ನಿಮ್ಮೂರು ಸ್ವರ್ಗ ಎದ್ದ ಹಾಗೆ ಇದೆ ಸರ್"--- ಅಂದ..... ಒಂದು ಕ್ಷಣ ನನ್ನ ಕಿವಿಗೆ ಜೇನು ತುಪ್ಪ ಹೊಯ್ದ ಹಾಗೆ ಆಯಿತು ನೋಡಿ !!!!  ನಿಜ ಹೇಳ್ತಿನ್ರಿ  ಹೇಗೆ ಊರು ಬಿಟ್ಟು ಊರಿಗೆ ಬಂದಾಗ  ಇಲ್ಲಿನ ಜನ ನಮ್ಮೂರಿನ ಬಗ್ಗೆ  ಹೀಗೆ ಹೊಗಳಿದಾಗ ಆಗುವ ಖುಷಿ ,  ಯಾರೇ ಬಂದು ಎಸ್ಟೇ ಕೋಟಿ ಹಣ ಕೊಟ್ರು ಆಗಲ್ಲ ಕಣ್ರೀ   ..... ..... ಏನಂತೀರ ????

ಮಂಗಳವಾರ, ಏಪ್ರಿಲ್ 22, 2014



ಮೊನ್ನೆ  ದಿನ ಗೆಳೆಯನನ್ನು ಭೇಟಿಮಾಡಲು ಹೋಗುವ ಸಲುವಾಗಿ ಬಸ್ ಸ್ಟಾಪ್ ಒಂದರಲ್ಲಿ ಬಸ್ಸಿಗೆ ಕಾಯುತ್ತ ನಿಂತಿದ್ದೆ ..
ನನ್ನ  ಪಕ್ಕ ಪ್ರತಿಷ್ಟಿತ ಐ ಟಿ  ಕಂಪನಿಯ ಐಡಿ ಕಾರ್ಡ್ ಧರಿಸಿದ ವ್ಯಕ್ತಿಗಳು ಬಸ್ ಕಾಯುತ್ತ ನಿಂತಿದ್ದರು . ಬಸ್ ಯಾಕೋ  ಮುನಿಸಿಕೊಂಡಂತೆ ತೋರುತ್ತಿತ್ತು . ಎಷ್ಟು ಹೊತ್ತಾದರೂ ಹೊತ್ತಾದರೂ ನಾನು   ಕಾಯುತ್ತಿದ್ದ ನಂಬರ್ ನ ಬಸ್ ಬಂದೆ ಇರಲಿಲ್ಲ  ಅದೇ ಸಮಯಕ್ಕೆ  ಯಾರೋ ಅಜ್ಜಿಯೊಬ್ಬರು ಬಂದರು , ಎಡಗೈಯಲ್ಲಿ ಒಂದು ಬ್ಯಾಗ್ ಬಲಗೈಯಲ್ಲಿ ಒಂದು ಸಣ್ಣ ಚೀಟಿಯನ್ನು ಹಿಡಿದಿದ್ದರು . ಅಲ್ಲಿ ಪ್ರತಿಷ್ಟಿತ ಕಂಪನಿ ಐಡಿ ಕಾರ್ಡ್  ದರಿಸಿದ್ದವರ ಬಳಿ ಅಜ್ಜಿ ಏನನ್ನೋ ಕೇಳುತ್ತಿದ್ದರು , ಅದಕ್ಕೆ ಅವರು  ಅಗುವುದಿಲ್ಲವೆಂಬಂತೆ ದೂರ ಸರಿಯುತ್ತಿದ್ದರು . ಒಂದು ಕ್ಷಣ ಅಜ್ಜಿ ಅಸಹಾಯಕರಾಗಿ ನಿಂತು ಬಿಟ್ಟರು .

ಹತ್ತಿರ ಹೋಗಿ ಏನಾಯಿತು ಅಜ್ಜಿ ಅಂತ ಕೇಳಿದೆ ?? ಅದಕ್ಕವರು " ಮಗ ನಮ್ ಹಳ್ಳಿ ಇಂದ ಮಗನ ಮನೆಗೆ ಬಂದೆ ಇಳಿಯುವ ಸ್ಟಾಪ್ ಗೊತ್ತಾಗದೆ ಎಲ್ಲಿ ಇಳಿದುಬಿಟ್ಟೆ , ಮಗನ ಮನೆಗೆ ಹೋಗಲು ಗೊತ್ತಾಗುತ್ತಿಲ್ಲ ದಯವಿಟ್ಟು ಈ ನಂಬರ್ ಗೆ ಫೋನ್ ಮಾಡಿ ಕೊಡ್ತಿಯ ನಿನ್ ಮೊಬೈಲಿಂದ" ಅಂತ ಅವರ ಕೈಲಿದ್ದ ಚೀಟಿ ನಂಗೆ ಕೊಟ್ಟರು.

ಅವರ ಮಗನಿಗೆ ಫೋನ್ ಮಾಡಿದೆ ವಿಷಯವನ್ನು ವಿವರಿಸಿ , ಅವರ ಮನೆಯ ಅಡ್ರೆಸ್ ತಿಳಿದು ಅಜ್ಜಿಯನ್ನು ಸರಿಯಾದ ಬಸ್ ಹತ್ತಿಸಿದೆ !!
ಬಸ್ ಹತ್ತುವಾಗ  " ನೂರು ವರ್ಷ ರಾಜನ ಹಾಗೆ ಬಾಳು ಮಗ " ಅಂತ ಆಶೀರ್ವದಿಸಿದರು . ಕೆಲವು ತಿಂಗಳ ಹಿಂದೆ ತೀರಿಹೋದ ನನ್ನ ಅಜ್ಜಿಯ ನೆನಪಾಗಿ ಎರಡು ಹನಿ ಕಣ್ಣಿರು ಬಂದಿದ್ದು  !!  ಅ ಅಜ್ಜಿ ಸಂತೋಷದಿಂದ ಬಸ್ ಹತ್ತಿ ಮಗನನ್ನು ಕಾಣುವ ತವಕದಲ್ಲಿದ್ದರು .

ಸಂಭಂದವೇ ಇಲ್ಲದವರು ಅನಿರಿಕ್ಷಿತವಾಗಿ ಸಿಕ್ಕಿ ಬಹಳ ಕಾಲ ಮನಸ್ಸಿನಲ್ಲಿ ಉಳಿಯುತ್ತಾರೆ !!
 ಕೊನೆಯಲ್ಲಿ ಕಾಡಿದ ಪ್ರಶ್ನೆ  ಪ್ರತಿಸ್ತಿತ  ಕಂಪನಿ ಸೇರಿದರೆ ಅಪರಿಚಿತರಿಗೆ ಸಹಾಯ ಮಾಡಬಾರದು ಅಂತ ಕಾನೂನು ಏನಾದ್ರು ಇದೆಯೇ ???? ಅಥವಾ ಪರೋಪಕಾರ , ಅಪರಿಚಿತರಿಗೆ ಸಹಾಯ ಮಾಡುವ ಗುಣ ಮರೆಯಾಗಿ ಹೋಯ್ತಾ ಇಂದಿನ  ಜನಾಂಗಕ್ಕೆ ????

ಭಾನುವಾರ, ಏಪ್ರಿಲ್ 13, 2014

        ಮನಸಾರೆ ಮರೆಯುವ ಮುನ್ನ
ಒಮ್ಮೆ ನೀ ಬಾರೆ
ಮಾತು ಮೌನಕ್ಕೆ ತಿರುಗುವ ಮುನ್ನ
ಒಮ್ಮೆ ನೀ ಮಾತಾಡೆ
ದೂರ ಸರಿಯುವ ಮುನ್ನ
ಒಮ್ಮೆ ತಿರುಗಿ ನೀ ನೋಡೆ
ಇಷ್ಟು ಸಾಕು ನೀ ಬದುಕಿರುವೇ
ನನ್ನಲ್ಲಿ 'ಖುಷಿ'ಯಾಗಿ.....

ಮಂಗಳವಾರ, ಏಪ್ರಿಲ್ 8, 2014

ಮನಸ್ಸ್ಯಾಕೊ  ನನ್ನೋಳಗಿಲ್ಲ
ಎದೆಯಲ್ಲಿ ನಿನ್ನ ನೆನಪೇ ಎಲ್ಲಾ
ನಿನಗ್ಯಾಕೋ ಇದರ ಪರಿವೆ ಇಲ್ಲ
ನೀನಿಲ್ಲದೆ ನಾನಿಲ್ಲ
ಕ್ಷಣವಾದರೂ ನೆನಪಾಗುತ್ತೀನ ನಾ ನಿನಗೆ  ಇಂದು  ನಾಳೆಯಲ್ಲ ?????

ಶುಕ್ರವಾರ, ಏಪ್ರಿಲ್ 4, 2014

ನಾನು ಅವನಾದಾಗ ....... !!!

ಮುಸ್ಸಂಜೆ ಹೊತ್ತು  P  G  ಬಾಲ್ಕನಿ ಲಿ ಒಬ್ಬನೇ ನಿಂತಿದ್ದೆ .....  ಮನಸ್ಸು ಯಾಕೋ ಮಂಕಾಗಿತ್ತು ..... ಒಂಟಿತನ ಬಯಸಿತ್ತು . 
 ಯಾರಲ್ಲೂ ಹೇಳಿಕೊಳ್ಳಲಾಗದ ನೋವು ಮನಸಲ್ಲಿ ಮನೆ ಮಾಡಿತ್ತು .  
 ಬೇಡ  ಬೇಡವೆಂದರೂ ಮನಸ್ಸು ಹಳೆಯ  ನೆನಪುಗಳತ್ತ ಓಡಿತ್ತು ..... 

ಆಕಸ್ಮಿಕವಾಗಿ ನೀ ನನಗೆ ಪರಿಚಯವಾಗಿದ್ದೆ , ಒಂದೇ ಊರಿನವರು ಎಂಬ ಕಾರಣಕ್ಕೆ ಆತ್ಮೀಯತೆ ಹೆಚ್ಚಾಗಿಯೇ ಇತ್ತು . 
ಪಕ್ಕದ ಮನೆಯವರೆ ಅಪರಿಚಿತರಗಿರುವ ಈ ಬೆಂಗಳೂರಿನಲ್ಲಿ ನಿನ್ನ ಗೆಳೆತನ ಸಿಕ್ಕಿದ್ದು ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಿದಂತಗಿತ್ತು ಕಣೆ 
 ಮುಂಗಾರಿನ ಮೊದಲ ಹನಿಗಳಂತೆ ಪಟ ಪಟನೆ ನೀನಾಡುತತಿದ್ದ ಮಾತು , ಕಿಲ ಕಿಲನೆ ನಗುತ್ತಿದ್ದ ನಿನ್ನ ನಗು ,ತಟ್ಟನೆ ತೋರುತ್ತಿದ್ದ ಹುಸಿ ಕೋಪ ಎಲ್ಲವು ಕನಸಲ್ಲೂ ಬಂದು ಕಾಡಿತ್ತು ನನಗೆ .... 

 ಮೊದ ಮೊದಲು ಕೇವಲ ಸ್ನೇಹಿತರಾಗಿ ಅಪರೂಪಕ್ಕೆ ಅಲ್ಲಿ ಎಲ್ಲಿ ಸಿಗ್ತಾ ಇದ್ವಿ !!!
ಒಂದು ಕಪ್ ಕಾಫಿ ಗೆ ನಮ್ಮ ಬೇಟಿ ಮುಗಿದಿರುತ್ತಿತ್ತು ....!!!

ನಮ್  ಗೆಳೆತನ ಅಷ್ಟಕ್ಕೆ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ ????

ಆದ್ರೆ .... 

ನನಗೆ ಅರಿವಿಲ್ಲದಂತೆ ನಿನ್ನ ಆ ನಗುವಿಗೆ ನನ್ನ ಮನಸ್ಸು ಕ್ಲೀನ್ ಬೋಲ್ಡ್ ಆಗಿತ್ತು . 
ನಿನ್ನ ಮನವು ನನ್ನ ಸಾಮಿಪ್ಯ ಬಯಸುತ್ತಿತ್ತು ... 

ನಂಗೆ ಇನ್ನು ಚೆನ್ನಾಗಿ ನೆನಪಿದೆ ಕಣೆ , ಒಂದು ದಿನ  ರಸ್ತೆ ದಾಟುವಾಗ ಮಗುವಂತೆ ನನ್ನ್ನ ಕೈ ಹಿಡಿದು ನೀನು  ನಡೆದಿದ್ದೆ... !!!
ಅಂದೇ ನನ್ನ ಮನಸ್ಸು  ತೀರ್ಮಾನಿಸಿತ್ತು , ಜೀವನ ಪೂರ್ತಿ ಹಾಗೆ ಕೈ ಹಿಡಿದು ನಡೆಯಬೇಕೆಂದು ..... 
ನನ್ನ ಮನದಾಸೆ ನಿನ್ನ ಬಾಯಲ್ಲಿ ಬಂದಾಗ ನಾನು ಅಕ್ಷರಶಃ ಮೂಕನಗಿದ್ದೆ , ಮನಸ್ಸು ಖುಷಿಯಲ್ಲಿ ಹಾರಡಿತ್ತು !!!


ನಿನ್ನದು ಮಗುವಿನಂತ ಮನಸ್ಸು ಕಣೆ ! ಚಿಕ್ಕ ಪುಟ್ಟ ವಿಷಯಗಳಿಗೂ ಕೋಪ ಅಚ್ಚರಿ ನಿನ್ನಲ್ಲಿರುತ್ತಿತು .... 
ಒಂದು ಲೋಟ ಕಾಫಿ ಗೆ ಅದೆಸ್ಟು ಸಲ ನನ್ನ ಮೇಲೆ ಹುಸಿ ಕೋಪ ತೋರಿಸಿದ್ದೆ , ಒಂದು ಪ್ಲೇಟ್ ಪಾನಿ ಪೋರಿಗೆ ಎಷ್ಟು ರಂಪಾಟ ಮಾಡಿದ್ದೆ ಮಗು ತರ ...! ಆದರೆ ಮರುಕ್ಷಣದಲ್ಲಿ sorry ಕಣೋ ಎಂದು ಹೇಳುವಾಗ ನಿನ್ನ ಕಣ್ಣಂಚಲ್ಲಿ ಕಣ್ಣೇರು ಜೆನುಗುತ್ತಿರುತ್ತಿತ್ತು ..... "ಹೋಗ್ಲಿ ಬಿಡು ಬಂಗಾರಿ " ಎಂದಾಗ ಕಿಲ ಕಿಲನೆ ನಕ್ಕು ಮೊದಲಿನಂತಗುತ್ತಿದ್ದೆ ... 

ಅದೆಲ್ಲ ಕೇವಲ ನೆನಪಾಗಿ ಉಳಿದಿದೆ ಅಸ್ಟೆ ..!!!

ನೀನು ಬಿಟ್ಟು ಹೋದ ಮೇಲಂತೂ ಮನಸ್ಸು ಮೌನಕ್ಕೆ ಶರಣಾಯಿತು .... 
ಯಾವುದಕ್ಕೂ ಅಳದ ಹುಡುಗ ನಾನು ಆದರೆ ನಿನಗಾಗಿ ಹಲವು ರಾತ್ರಿ ನಿದ್ದೆ ಇಲ್ಲದೆ ಬಿಕ್ಕಳಿಸಿ ಅತ್ತಿದ್ದೆ .. ಆದರೆ ನನ್ನ ಮನದ ಹಕ್ಕಿಯ ರೋದನೆ ನಿನಗೆ ಕೆಳದಾಯಿತು .... 

ಹೋಗ್ಲಿ ಬಿಡು ...... ಎಲ್ಲವು ಹಣೆಬರಹ ... !!!

ಯಾವಾಗಲು ನೀನು ಹೇಳುತ್ತಿದ್ದ ಮಾತು " ನಮ್ಮ ಜೀವನದಲ್ಲಿ ಯಾರು ಕೊನೆ ತನಕ ಬರಲ್ಲ ಕಣೋ ".  ಇ ಮಾತಿನ ಸಂಪೂರ್ಣ ಅನುಭವ ನನಗಾಯಿತು .  ಆದ್ರೆ ನನ್ನ ಜೀವನದ ಕೊನೆವರೆಗೂ ಬರೋಕ್ಕೆ ನೀ ಬಿಟ್ಟು ಹೋದ ನೆನಪುಗಳ ಬುತ್ತಿ ಇದೆ ಕಣೆ ..!!

ಹೊಸಬರೊಂದಿಗೆ ಹೊಸ ಜೀವನ ಆರಂಬಿಸುವ ಅಂಚಿನಲ್ಲಿ ನೀನಿದ್ಯ ..... ಆಲ್ ದಿ ಬೆಸ್ಟ್ !! ಜೀವನದಲ್ಲಂತೂ ನೀನು ನಂಗೆ ಸಿಗ್ಲಿಲ್ಲ ... ! 
ಆದ್ರೆ ದಿನಾ ನನ್ನ ಕನಸಿನಲ್ಲಿ ರಾಜಕುಮಾರಿ ಹಾಗೆ ಬರೋ ನಿಂಗೆ ನಾನೆ ರಾಜಕುಮಾರ ಆಗಿರಬೇಕು ಅನ್ನೋ ಆಸೆ ನನ್ನದು.. 
ಬರ್ತೀಯ ಅಲ್ವಾ ...??  ಪ್ಲೀಸ್ ಈ ನನ್ನ ಒಂದು ಚಿಕ್ಕ ಆಸೇನಾದ್ರು ಪೂರೈಸು .!! ಕನಸಲ್ಲಾದರೂ ಜೊತೆಯಾಗಿ ಬಾಳೋಣ ..!!! 


ಅದ್ರೂ ನನ್ನ ಮನಸಲ್ಲಿ ಒಂದು ಪ್ರಶ್ನೆ ಕಾಡ್ತಾ ಇದೆ ಕಣೆ ..
 
"ನಿನ್ನೆ ಮೊನ್ನೆವರೆಗೂ ನೀನೆ ನಂಗೆ ಎಲ್ಲ ಅಂತ ಹೇಳ್ತಿದ್ದೊಳು ..  ಅದು ಹೇಗೆ ಎಷ್ಟು ಬೇಗ ಬೇರೆಯವರ ಮನದರಸಿ ಆಗೋಕೆ ಒಪ್ಪಿದೆ ....????"

ನಂಗೆ ಗೊತ್ತು ಈ ಪ್ರಶ್ನೆಗೆ ಉತ್ತರ ಸಿಗೋಲ್ಲ ಅಂತ ....!!