ಶುಕ್ರವಾರ, ಏಪ್ರಿಲ್ 4, 2014

ನಾನು ಅವನಾದಾಗ ....... !!!

ಮುಸ್ಸಂಜೆ ಹೊತ್ತು  P  G  ಬಾಲ್ಕನಿ ಲಿ ಒಬ್ಬನೇ ನಿಂತಿದ್ದೆ .....  ಮನಸ್ಸು ಯಾಕೋ ಮಂಕಾಗಿತ್ತು ..... ಒಂಟಿತನ ಬಯಸಿತ್ತು . 
 ಯಾರಲ್ಲೂ ಹೇಳಿಕೊಳ್ಳಲಾಗದ ನೋವು ಮನಸಲ್ಲಿ ಮನೆ ಮಾಡಿತ್ತು .  
 ಬೇಡ  ಬೇಡವೆಂದರೂ ಮನಸ್ಸು ಹಳೆಯ  ನೆನಪುಗಳತ್ತ ಓಡಿತ್ತು ..... 

ಆಕಸ್ಮಿಕವಾಗಿ ನೀ ನನಗೆ ಪರಿಚಯವಾಗಿದ್ದೆ , ಒಂದೇ ಊರಿನವರು ಎಂಬ ಕಾರಣಕ್ಕೆ ಆತ್ಮೀಯತೆ ಹೆಚ್ಚಾಗಿಯೇ ಇತ್ತು . 
ಪಕ್ಕದ ಮನೆಯವರೆ ಅಪರಿಚಿತರಗಿರುವ ಈ ಬೆಂಗಳೂರಿನಲ್ಲಿ ನಿನ್ನ ಗೆಳೆತನ ಸಿಕ್ಕಿದ್ದು ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಿದಂತಗಿತ್ತು ಕಣೆ 
 ಮುಂಗಾರಿನ ಮೊದಲ ಹನಿಗಳಂತೆ ಪಟ ಪಟನೆ ನೀನಾಡುತತಿದ್ದ ಮಾತು , ಕಿಲ ಕಿಲನೆ ನಗುತ್ತಿದ್ದ ನಿನ್ನ ನಗು ,ತಟ್ಟನೆ ತೋರುತ್ತಿದ್ದ ಹುಸಿ ಕೋಪ ಎಲ್ಲವು ಕನಸಲ್ಲೂ ಬಂದು ಕಾಡಿತ್ತು ನನಗೆ .... 

 ಮೊದ ಮೊದಲು ಕೇವಲ ಸ್ನೇಹಿತರಾಗಿ ಅಪರೂಪಕ್ಕೆ ಅಲ್ಲಿ ಎಲ್ಲಿ ಸಿಗ್ತಾ ಇದ್ವಿ !!!
ಒಂದು ಕಪ್ ಕಾಫಿ ಗೆ ನಮ್ಮ ಬೇಟಿ ಮುಗಿದಿರುತ್ತಿತ್ತು ....!!!

ನಮ್  ಗೆಳೆತನ ಅಷ್ಟಕ್ಕೆ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ ????

ಆದ್ರೆ .... 

ನನಗೆ ಅರಿವಿಲ್ಲದಂತೆ ನಿನ್ನ ಆ ನಗುವಿಗೆ ನನ್ನ ಮನಸ್ಸು ಕ್ಲೀನ್ ಬೋಲ್ಡ್ ಆಗಿತ್ತು . 
ನಿನ್ನ ಮನವು ನನ್ನ ಸಾಮಿಪ್ಯ ಬಯಸುತ್ತಿತ್ತು ... 

ನಂಗೆ ಇನ್ನು ಚೆನ್ನಾಗಿ ನೆನಪಿದೆ ಕಣೆ , ಒಂದು ದಿನ  ರಸ್ತೆ ದಾಟುವಾಗ ಮಗುವಂತೆ ನನ್ನ್ನ ಕೈ ಹಿಡಿದು ನೀನು  ನಡೆದಿದ್ದೆ... !!!
ಅಂದೇ ನನ್ನ ಮನಸ್ಸು  ತೀರ್ಮಾನಿಸಿತ್ತು , ಜೀವನ ಪೂರ್ತಿ ಹಾಗೆ ಕೈ ಹಿಡಿದು ನಡೆಯಬೇಕೆಂದು ..... 
ನನ್ನ ಮನದಾಸೆ ನಿನ್ನ ಬಾಯಲ್ಲಿ ಬಂದಾಗ ನಾನು ಅಕ್ಷರಶಃ ಮೂಕನಗಿದ್ದೆ , ಮನಸ್ಸು ಖುಷಿಯಲ್ಲಿ ಹಾರಡಿತ್ತು !!!


ನಿನ್ನದು ಮಗುವಿನಂತ ಮನಸ್ಸು ಕಣೆ ! ಚಿಕ್ಕ ಪುಟ್ಟ ವಿಷಯಗಳಿಗೂ ಕೋಪ ಅಚ್ಚರಿ ನಿನ್ನಲ್ಲಿರುತ್ತಿತು .... 
ಒಂದು ಲೋಟ ಕಾಫಿ ಗೆ ಅದೆಸ್ಟು ಸಲ ನನ್ನ ಮೇಲೆ ಹುಸಿ ಕೋಪ ತೋರಿಸಿದ್ದೆ , ಒಂದು ಪ್ಲೇಟ್ ಪಾನಿ ಪೋರಿಗೆ ಎಷ್ಟು ರಂಪಾಟ ಮಾಡಿದ್ದೆ ಮಗು ತರ ...! ಆದರೆ ಮರುಕ್ಷಣದಲ್ಲಿ sorry ಕಣೋ ಎಂದು ಹೇಳುವಾಗ ನಿನ್ನ ಕಣ್ಣಂಚಲ್ಲಿ ಕಣ್ಣೇರು ಜೆನುಗುತ್ತಿರುತ್ತಿತ್ತು ..... "ಹೋಗ್ಲಿ ಬಿಡು ಬಂಗಾರಿ " ಎಂದಾಗ ಕಿಲ ಕಿಲನೆ ನಕ್ಕು ಮೊದಲಿನಂತಗುತ್ತಿದ್ದೆ ... 

ಅದೆಲ್ಲ ಕೇವಲ ನೆನಪಾಗಿ ಉಳಿದಿದೆ ಅಸ್ಟೆ ..!!!

ನೀನು ಬಿಟ್ಟು ಹೋದ ಮೇಲಂತೂ ಮನಸ್ಸು ಮೌನಕ್ಕೆ ಶರಣಾಯಿತು .... 
ಯಾವುದಕ್ಕೂ ಅಳದ ಹುಡುಗ ನಾನು ಆದರೆ ನಿನಗಾಗಿ ಹಲವು ರಾತ್ರಿ ನಿದ್ದೆ ಇಲ್ಲದೆ ಬಿಕ್ಕಳಿಸಿ ಅತ್ತಿದ್ದೆ .. ಆದರೆ ನನ್ನ ಮನದ ಹಕ್ಕಿಯ ರೋದನೆ ನಿನಗೆ ಕೆಳದಾಯಿತು .... 

ಹೋಗ್ಲಿ ಬಿಡು ...... ಎಲ್ಲವು ಹಣೆಬರಹ ... !!!

ಯಾವಾಗಲು ನೀನು ಹೇಳುತ್ತಿದ್ದ ಮಾತು " ನಮ್ಮ ಜೀವನದಲ್ಲಿ ಯಾರು ಕೊನೆ ತನಕ ಬರಲ್ಲ ಕಣೋ ".  ಇ ಮಾತಿನ ಸಂಪೂರ್ಣ ಅನುಭವ ನನಗಾಯಿತು .  ಆದ್ರೆ ನನ್ನ ಜೀವನದ ಕೊನೆವರೆಗೂ ಬರೋಕ್ಕೆ ನೀ ಬಿಟ್ಟು ಹೋದ ನೆನಪುಗಳ ಬುತ್ತಿ ಇದೆ ಕಣೆ ..!!

ಹೊಸಬರೊಂದಿಗೆ ಹೊಸ ಜೀವನ ಆರಂಬಿಸುವ ಅಂಚಿನಲ್ಲಿ ನೀನಿದ್ಯ ..... ಆಲ್ ದಿ ಬೆಸ್ಟ್ !! ಜೀವನದಲ್ಲಂತೂ ನೀನು ನಂಗೆ ಸಿಗ್ಲಿಲ್ಲ ... ! 
ಆದ್ರೆ ದಿನಾ ನನ್ನ ಕನಸಿನಲ್ಲಿ ರಾಜಕುಮಾರಿ ಹಾಗೆ ಬರೋ ನಿಂಗೆ ನಾನೆ ರಾಜಕುಮಾರ ಆಗಿರಬೇಕು ಅನ್ನೋ ಆಸೆ ನನ್ನದು.. 
ಬರ್ತೀಯ ಅಲ್ವಾ ...??  ಪ್ಲೀಸ್ ಈ ನನ್ನ ಒಂದು ಚಿಕ್ಕ ಆಸೇನಾದ್ರು ಪೂರೈಸು .!! ಕನಸಲ್ಲಾದರೂ ಜೊತೆಯಾಗಿ ಬಾಳೋಣ ..!!! 


ಅದ್ರೂ ನನ್ನ ಮನಸಲ್ಲಿ ಒಂದು ಪ್ರಶ್ನೆ ಕಾಡ್ತಾ ಇದೆ ಕಣೆ ..
 
"ನಿನ್ನೆ ಮೊನ್ನೆವರೆಗೂ ನೀನೆ ನಂಗೆ ಎಲ್ಲ ಅಂತ ಹೇಳ್ತಿದ್ದೊಳು ..  ಅದು ಹೇಗೆ ಎಷ್ಟು ಬೇಗ ಬೇರೆಯವರ ಮನದರಸಿ ಆಗೋಕೆ ಒಪ್ಪಿದೆ ....????"

ನಂಗೆ ಗೊತ್ತು ಈ ಪ್ರಶ್ನೆಗೆ ಉತ್ತರ ಸಿಗೋಲ್ಲ ಅಂತ ....!!   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ